Friday, September 4, 2009

ಹೀಗೇಕೆ?

ನಿನ್ ಬೆರಳ ಕುಂಚದಲಿ ಮೈ ತುಂಬ
ಅರಿಶಿಣದ ಚಿತ್ತಾರ ಮಾಡಲೇಕೆ?

ರಕ್ತದಿಂದಾದರೂ ಸರಿ, ಹಣೆ ಮೇಲೆ
ಕುಂಕುಮವ ತೀಡಲೇಕೆ?

ನಿನ್ ಹೃದಯ ಕೋಟೆಯ ಪಟ್ಟದರಸಿ ಆಗಲಾರದ ನನ್ನನ್ನು
ಕೇವಲ ದಾಸಿ ಮಾಡಿಕೊಳ್ಳಲೇಕೆ ?

ಕಾದಿರುವೆ ಅರಸ ಕೋಟೆ ಬಾಗಿಲ ಸಂದಿಯಲ್ಲೇ,
ಕಣ್ ದೃಷ್ಟಿ ಒಮ್ಮೆಯೂ ನನ್ನತ್ತ ಹರಿಸಲೇಕೆ ??

No comments:

Post a Comment